Monday, August 10, 2009

ಹನಿಗವನಗಳು

ಪುಟ್ಟನ ಪ್ರಶ್ನೆ
ಫಿಲ್ಟರ್ ನೀರು ಮಿನೆರಲ್ ವಾಟರ್
ಕುಡಿಸಿ ಬೆಳಸಿನೆಂದು
ಜಂಭ ಕೊಚ್ಚಿದ ಅಪ್ಪನಿಗೆ
ಪುಟ್ಟನು ಕೇಳಿದ
ಇಷ್ಟೆಲ್ಲಾ ಪರಿಸರ ಹಾಳು ಮಾಡಿದ್ದು ಯಾರು?

ಮರ್ಯಾದಾ ಪುರುಷೋತ್ತಮ ರಾಮ
ತಲೆಕೆಟ್ಟ ರಾವಣ ನನ್ನ ಹೆಂಡತಿಯ
ಹೊತ್ತ್ಯುದಾಗ ಯುದ್ಧ ಮಾಡಿ ಬಿಡಿಸಿಕೊಂಡು ಬಂದೆ
ಏಕೆಂದರೆ ಅದು ಮರ್ಯಾದೆಯ ಪ್ರಶ್ನೆ!
ಅಗಸನ ಮಾತಿಗೆ ಪ್ರಜಾ ಆರೋಪಕ್ಕೆ ಅಂಜಿ
ಮತ್ತೆ ಬಸರಿ ಹೆಂಡತಿಯ ಕಾಡಿಗೆ ಕಳುಹಿಸಿದೆ
ಏಕೆಂದರೆ ಅದು ಮರ್ಯಾದೆಯ ಪ್ರಶ್ನೆ !!